ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಸಾಮಾನ್ಯವಾಗಿ ಇದುವರೆಗೆ ಗುಲಾಬಿ ಹೂಗಳನ್ನು, ಕೆಂಪು, ನೆರಳೆ, ಹಳದಿ ಬಣ್ಣಗಳಲಿ ಕಾಣುತ್ತ ಬಂದಿದ್ದೇವೆ. ಹಾಗೆ ಹತ್ತಿಯನ್ನು ಸಹ ಶ್ವೇತ ವರ್ಣದಲ್ಲಿ ಕಾಣುತ್ತ ಬಂದಿದ್ದೇವೆ. ಆದರೆ ನಮಗಿಷ್ಟವಾದ ಬಣ್ಣಗಳಲ್ಲಿ ಹೂವು ಹತ್ತಿಯನ್ನು ಜೈವಿಕ ತಂತ್ರಜ್ಞಾನದಿಂದ ಪಡೆಯಬಹುದೆಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಬೇವಿನ ಮರದಲ್ಲಿ ಮಾವನ್ನು, ಮಾವಿನಮರದಲ್ಲಿ ಬೇವನ್ನು ಹೀಗೆ ಹಣ್ಣುಗಳ ಜಾತಿಗಳನ್ನು ವಿಭಿನ್ನ ಜಾತಿಯ ಮರಗಳಲ್ಲಿ ಪಡೆಯಬಹುದೆಂಬುವುದು ಆಶ್ಚರ್ಯ. ಆದರೆ ಈ ಕಲ್ಪನೆಗಳೆಲ್ಲ ಸತ್ಯವಾಗುತ್ತಲಿವೆ. ಸೃಷ್ಟಿ ಸಹಸ ಕ್ರಿಯೆಗೆ ಜೈವಿಕ ಸಂಚಲನದಿಂದ ಹೀಗೆಲ್ಲ ಮಾಡಬಹುದೆಂದು ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

ಹಳದಿ, ಕೆಂಪು, ನೆರಳೆ ಗುಲಾಬಿ ಹೂಗಳು ನಿಸರ್ಗದಲ್ಲಿವೆ. ಇವುಗಳನ್ನು ನಮಗಿಷ್ಟ ಬಂದ ಬಣ್ಣಗಳಲ್ಲಿ ಬೆಳೆಯಲು ಹಾಲೆಂಡಿನಲ್ಲಿ ಸಂಶೋಧನೆಗಳು ನಡೆಯುತ್ತಲಿವೆ. ಸೂಕ್ತ ಬಣ್ಣದ ವಂಶಾಣುಗಳನ್ನು ಇತರೆಹೂಗಳಿಂದ ತೆಗೆದು ಇತರ ಹೂಗಳಿಗೆ ಸಂಯೋಜನೆ ಮಾಡಿದರಾಯಿತು. ಈವರೆಗೆ ಅಸಾಧ್ಯವೆನಿಸಿದ ಜೆರ್ಮೇನಿಯಂ ಲೋಹದ ಇಟ್ಟಿಗೆ ಕೆಂಪು ವರ್ಣವನ್ನು ಸೃಷ್ಟಿಸುವುದು ಅಸಾಧ್ಯವೆಂದು ತಿಳಿಯಲಾಗಿತ್ತು ಮೆಕ್ಕೆ ಜೋಳದ ಬಣ್ಣದ ವಂಶಾಣುವನ್ನು ಗುಲಾಬಿ ತಳಿಗೆ ವರ್ಗಾಯಿಸಿ ಈಗ ಆವರ್ಣದ ಗುಲಾಬಿಯನ್ನು ಬೆಳೆಯಲಾಗಿದೆ. ಈ ಬಣ್ಣಗಳಲ್ಲದೇ ನಿಸರ್ಗದ ಇತರೇ ವಿನ್ಯಾಸಗಳನ್ನು ಹೂಗಳಲ್ಲಿ ಮೂಡಿಸುವ ಪ್ರಯತ್ನಗಳು ನಡೆದಿವೆ. ನಮಗೆಲ್ಲ ತಿಳಿದಿರುವಂತೆ ನೀಲಿ ಹತ್ತಿಯನ್ನು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಇತರೆ ವರ್ಣದ ಹತ್ತಿಯನ್ನು ಬೆಳೆಯಲು ಸಾಧ್ಯವಾದರೆ ಬೇರೆ ಬಣ್ಣಗಳನ್ನು ಹತ್ತಿಗೆ ಸೇರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಹೊಡೆತಬೀಳಬಹುದು. ಈ ಕೈಗಾರಿಕೆಯಲ್ಲಿ ಬಳೆಸುತ್ತಿರುವ ಸೀಸ ಲೋಹ ಮೂಲದ ವರ್ಣದ್ರವ್ಯಗಳು ವಿಷಕಾರಕವೆನಿಸಿದ್ದು ಕಾರ್ಮಿಕರ ಮತ್ತು ಕೈಗಾರಿಕಾ ವರ್ಜೋಜಲ ಹರಿವ ನೀರಿಗೆ ಸೀಸವನ್ನು ಸೇರಿಸಿ ನೀರಿನಲ್ಲಿರುವ ಪ್ರಾಣಿಗಳಿಗೆ ಹಾಗೂ ಅದನ್ನು ಸೇವಿಸುವ ಪ್ರಾಣಿಗಳಿಗೆ ಅಪಾಯಕಾರಿಯೆಂದು ಸಾಬೀತಾಗಿದೆ. ಇಂಥಹ ಹೊಸ ಸಂಶೋಧನೆಗಳು ಕೈಗಾರಿಕಾ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಪರಿಸರಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಈಗಾಗಲೇ ನಿಸರ್ಗಲ್ಲಿರುವ ಸುಗಂಧ ಪುಪ್ಪಗಳು, ಹಣ್ಣುಗಳು, ತರಕಾರಿಗಳು ನಿಸರ್ಗದ ಮಿಲಿಯಾಂತರ ವರ್ಷಗಳ ವಿಕಾಸದಿಂದ ಸೃಷ್ಟಿಯಾಗಿವೆ. ನಿಸರ್ಗದ ಮೂಲವನ್ನೂ ಅರಿತು ಅದರ ತಂತ್ರವನ್ನು ಮನುಷ್ಯನ ಜೈವಿಕ ತಂತ್ರಜ್ಞಾನದಲ್ಲಿ ಬಳಸಿ ಆಕ್ರಿಯೆಗೆ ಬೇಕಾಗುವ ಮಿಲಿಯಾಂತರ ವರ್ಷಗಳ ಬದಲು ಒಂದೆರೆಡು ವರ್ಷಗಳಲ್ಲಿಯೇ ಅದನ್ನು ಸಾಧಿಸಬಹುದು. ಇದರಿಂದಾಗಿ ವಿಕಾಸವನ್ನು ವೇಗಗೊಳಿಸುವ ಪ್ರಯತ್ನದಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವನ್ನೂ ವಹಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ಅಸ್ವಸ್ಥರು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys